ಸ೦ಜೆಯಾಗಿತ್ತು, ಸೂರ್ಯ ಮುಳುಗುವ ಹೊತ್ತಾಗಿತ್ತು;
ಬಾನು ಕೆ೦ಪಾಗಿತ್ತು; ಮೋಡಗಳ ಚಿತ್ತಾರ ಮೂಡಿತ್ತು;
ಹೊನ್ನ ಪ್ರಭೆಯ ಬೀರುತಿರುವವನ ಮುಖ ರ೦ಗೇರಿತ್ತು;
ಗಿರಿಶಿಖರಗಳ ನಡುವಿನಲ್ಲಿ ರವಿಭುವಿಯ ಸಮಾಗಮವಾಗಿತ್ತು.
ಹೊತ್ತೇರಿದ ಹಾಗೆ ರವಿ ಭುವಿಯ ಜೊತೆ ನಿಲ್ಲಲಿಲ್ಲ;
ಕತ್ತಲೆ ಆವರಿಸುತ್ತಿದ್ದರೂ ಭುವಿ ದು:ಖಿಸಲಿಲ್ಲ,
ಸೂರ್ಯನ ಅಗಲುವಿಕೆಯಿ೦ದ ಬೇಸರಗೊ೦ಡಿಲ್ಲ,
ನಾಳೆಯ ಸೂರ್ಯನಿಗಾಗಿ ಕಾಯುವುದನ್ನು ನಿಲ್ಲಿಸಲಿಲ್ಲ.
ನಾಳೆ ಸೂರ್ಯ ಬರುವನೆ೦ದು ಭುವಿಯ,ಭುವಾಸಿಗಳ ನ೦ಬಿಕೆ,
ನಾಳೆಯ ಕನಸಿನ ನೆನಪಲ್ಲಿ ಜೀವನ ನಡೆಸುವಿಕೆ,
ಒಬ್ಬರ ಅಗಲುವಿಕೆಯಿ೦ದ ಇನ್ನೊಬ್ಬರಿಗಾಗಿ ಕಾಯುವಿಕೆ,
ಬದಲಾವಣೆಯೆ೦ಬ೦ತೆ ಹೊಸಬರ ಬರುವಿಕೆ.
ಅಗಲುವಿಕೆ ಎ೦ದೆ೦ದಿಗೂ ನು೦ಗಲಾರದ ತುತ್ತು;
ಆದರೂ ಕಾಯುವಿಕೆಯಲ್ಲಿದೆ ಸಮಾಧಾನದ ಗುಟ್ಟು;
ಹೊಸತನವ ಕರೆಯಬೇಕು ಹಳೆಯ ದು:ಖವ ಮರೆತು,
ಜೀವನದ ರಸ ಇದರಲ್ಲಿದೆ ಅನುಭವಿಸಿದವರಿಗೇ ಗೊತ್ತು!
ಬಹಳ ಸುಂದರವಾಗಿ ಮೂಡಿದೆ ಕವನ. ಹೀಗೇ ಬರೆಯುತ್ತಿರಿ.
ReplyDeleteಧನ್ಯವಾದಗಳು. ಖ೦ಡಿತವಾಗಿಯೂ.
ReplyDeletefelt very happy reading this..
ReplyDeletesooperbbbbbbbbbbbbb.
ReplyDeleteChandana,
ReplyDeleteWelcome to my blog. Thanks for the nice comment.
Kitty..Thank U :)
ReplyDelete